ಡಾ. ಕೆ. ಚಿನ್ನಪ್ಪ ಗೌಡ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು. ಕನ್ನಡ ಮತ್ತು ತುಳು ಎರಡು ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. == ಹುಟ್ಟು == ಇವರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕೂಡೂರು ಎಂಬ ಊರಿನಲ್ಲಿ ಜನಿಸಿದರು. == ವಿದ್ಯಾಭ್ಯಾಸ == ಮದರಾಸು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಕನ್ನಡ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ. ಬಿ.ಎ. ವಿವೇಕ ರೈ ಅವರ ಮಾರ್ಗದರ್ಶನದಲ್ಲಿ 'ಭೂತಾರಾಧನೆ-ಜಾನಪದೀಯ ಅಧ್ಯಯನ' ವಿಷಯಕ್ಕೆ ಪಿಹೆಚ್.ಡಿ.ಪದವಿ == ಉದ್ಯೋಗ == ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಸೇವೆ. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ,ವಿಭಾಗದ ಅಧ್ಯಕ್ಷರಾಗಿ ಸೇವೆ. ಕಲಾ ನಿಕಾಯದ ಡೀನ್ ಆಗಿ ಸೇವೆ. ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ಉಪಕುಲಪತಿಗಳು ಕರ್ನಾಟಕ ಜಾನಪದ ವಿಸ್ವವಿದ್ಯಾನಿಲಯ ಹಾವೇರಿ. == ಪರಿಣತಿ == ಆಧುನಿಕ ಕನ್ನಡ ಸಾಹಿತ್ಯ ಮತ್ತು ಜಾನಪದ ಅಧ್ಯಯನದ ಬಗೆಗೆ ವಿಶೇಷ ಪರಿಣತಿ ಹೊಂದಿದ್ದಾರೆ. ಜಾನಪದ, ತುಳು ಮೌಖಿಕ ಕಥನ ಮತ್ತು ಸಾಂಸ್ಕೃತಿಕ ಅಧ್ಯಯನದ ಬಗೆಗೆ ಪರಿಣತರು. ೧೩ ವಿದ್ಯಾರ್ಥಿಗಳಿಗೆ ಪಿಹೆಚ್.ಡಿ. ಅಧ್ಯಯನಕ್ಕೆ ಮಾರ್ಗದರ್ಶನ. ೫ ವಿದ್ಯಾರ್ಥಿಗಳಿಗೆ ಎಂ.ಫಿಲ್. ಅಧ್ಯಯನಕ್ಕೆ ಮಾರ್ಗದರ್ಶನ. == ಸಾಧನೆ == ಫಿನ್ಲೆಂಡಿನ ಪೋಸ್ಟ್ ಡಾಕ್ಟ್ರಲ್ ಫೆಲೊಶಿಪ್ ಜಪಾನಿನ ಜಪಾನ್ ಫೌಂಡೇಶನ್ ಫೆಲೊಸಿಪ್ ಜರ್ಮನಿಯ ಊರ್ಝಬರ್ಗ್‌ನ ಮ್ಯಾಕ್ಸ್‌ಮಿಲ್ಲನ್ಸ್ ವಿಶ್ವವಿದ್ಯಾನಿಲಯಕ್ಕೆ ಭಾರತದ ಭಾರತೀಯ ಕೌನ್ಸಿಲ್‍ನಿಂದ ಸಾಂಸ್ಕೃತಿಕ ರಾಯಭಾರಿಯಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ ಆಯ್ಕೆ. ತುರ್ಕಿ ವಿಶ್ವವಿದ್ಯಾಲಯ, ಫಿನ್ಲೆಂಡ್, ತ್ಯುಬಿಂಗೆನ್ ವಿಶ್ವವಿದ್ಯಾನಿಲಯ, ಜರ್ಮನಿಯ ಊರ್ಝಬರ್ಗ್‌ನ ಮ್ಯಾಕ್ಸ್‌ಮಿಲ್ಲನ್ಸ್ ವಿಶ್ವವಿದ್ಯಾನಿಲಯ, ಜರ್ಮನಿ ಮತ್ತು ತ್ಸುಬೊಚಿ ಥಿಯೆಟರ್ ಮ್ಯೂಸಿಯಮ್, ವಾಸ್ದಾ ವಿಶ್ವವಿದ್ಯಾನಿಲಯ ಟೋಕಿಯೋ ಜಪಾನ್ ಮುಂತಾದ ದೇಶಗಳ ವಿಶ್ವವಿದ್ಯಾನಿಲಯಗಳಿಗೆ ಜಾನಪದ ಮತ್ತು ಕಂಪೇರಿಟಿವ್ಹ್ ರಿಲಿಜಿಯಸ್ ಬಗ್ಗೆ ಸಂದರ್ಶಕರಾಗಿ ಭೇಟಿ ಹಲವಾರು ಮುಖ್ಯ ಸಂಶೋಧನೆಗಳಿಗೆ ಮಾರ್ಗದರ್ಶನ ವಿದೇಶಿ ವಿಶ್ವವಿದ್ಯಾನಿಲಯಗಳೊಂದಿಗೆ ಜಂಟಿಯಾಗಿ ಸಂಶೋಧನಾ ಯೋಜನೆಗಳಲ್ಲಿ ತೊಡಗಿದ್ದಾರೆ. == ಬರೆದ ಪುಸ್ತಕಗಳು == ತುಳು ಸಾಹಿತ್ಯ ಮತ್ತು ಸಂಶೋಧನೆ ವಿಭಾಗದಲ್ಲಿ ಆಯ್ಕೆಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಪ್ರಾಧ್ಯಾಪಕರಾಗಿರುವ ಚಿನ್ನಪ್ಪ ಗೌಡ ಭೂತಾರಾಧನೆ ಕೆಲವು ಅಧ್ಯಯನಗಳು, ಜಾಲಾಟ, ಸಂಸ್ಕೃತಿ ಸಿರಿ, ರತ್ನಮಾನಸ ಸೇರಿದಂತೆ 20ಕ್ಕೂ ಅಧಿಕ ಪುಸ್ತಕಗಳನ್ನು ರಚಿಸಿದ್ದಾರೆ. ಜಾಲಾಟ ಭೂತಾರಾಧನೆ ಭೂತಾರಾಧನೆ - ಜಾನಪದೀಯ ಅಧ್ಯಯನ ಸಂಸ್ಕೃತಿ ಸಿರಿ ಗೌಡ ಸಂಸ್ಕೃತಿ ಮತ್ತು ಆಚರಣೆಗಳು. ಸೇರಿಗೆ. == ಉಲ್ಲೇಖ ==